
ಸೋಮನಾಥಪುರದ ಚನ್ನಕೇಶವ ದೇವಾಲಯದಲ್ಲಿನ ಉತ್ತರಕ್ಕಿರುವ ಗರ್ಭಗುಡಿಯ ಒಳಗಿನ ಕೃಷ್ಣನ ಮೂರ್ತಿಯ ಹೊಟ್ಟೆಯಲ್ಲಿ ಬಸವನ ಮುಖ ಎದ್ದು ಕಾಣುತ್ತದೆ. ವಿಕಾಸವಾದದ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಈ ಶಿಲ್ಪವನ್ನು ಉದಾಹರಿಸುತ್ತಿದ್ದ ಲೇಖಕರಿಗೆ ಅದನ್ನು ಕೆತ್ತಿದ ಶಿಲ್ಪಿಯ ಮೂಲ ತಿಳಿದುಬರುತ್ತದೆ. ಗೊಲ್ಲರವನಾದ ಶಿಲ್ಪಿ ತನ್ನ ಮೂಲವಂಶದ ಕಸುಬಿನ ಗುರುತಾದ ಗೋವನ್ನು ಕೃಷ್ಣನ ಎದೆಯಲ್ಲಿ ಅಡಗಿಸಿಟ್ಟಿರುವನು. 'ಆ ಶಿಲ್ಪ ನೋಡಿ ದೇವಾಲಯದ ಯಾವುದೇ ಗಂಡಸಿನ ಮೂರ್ತಿ ಮುಂದೆ ನಿಂತರೂ ಅವುಗಳ ಹೊಟ್ಟೆ ಮತ್ತು ಎದೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬಸವನ ಮುಖ ಕಾಣಲು ಪ್ರಾರಂಭವಾಗುತ್ತದೆ' ಎಂದು ಹೇಳಿ ಲೇಖಕರು ನಮಗೆ ಯೋಚಿಸಲು ಹಚ್ಚುತ್ತಾರೆ.
ಗಣೇಶಯ್ಯನವರ ಕಥೆ ಓದಿ ನನ್ನ ಸಂಗ್ರಹದಲ್ಲಿದ್ದ ಹಳೆಯ ಚಿತ್ರವೊಂದನ್ನು ತೆಗೆದೆ. ಅದು ತಲಕಾಡಿನ ದೇವಾಲಯದ ದ್ವಾರಪಾಲಕನ ಚಿತ್ರ. ಅದರಲ್ಲೂ ಬಸವ ಹೊಟ್ಟೆಯಲ್ಲಿ ಪಡಿಮೂಡಿದ್ದಾನೆ. ಅದರ ಬಗ್ಗೆ ಯಾರಿಗಾದರೂ ತಿಳಿದರೆ, ತಿಳಿದಿದ್ದರೆ ದಯವಿಟ್ಟು ತಿಳಿಸಿ.