ನವೊಲ್ಲಾಸ
ಅವರವರ ಸತ್ಯಗಳ ನಡುವೆ-ಬಿ.ಸುರೇಶರ ಬರಹ
3 hours ago















ನವದೆಹಲಿಯಲ್ಲಿ ೩೦-೧೨-೧೯೮೨ ರಂದು ನಡೆದ ರಾಷ್ಟ್ರೀಯ ಅಂಚೆ ಚೀಟಿ ಪ್ರದರ್ಶನದಲ್ಲಿ ಬಿಡುಗಡೆಯಾದ ಈ ವಿಶೇಷ ಅಂಚೆಚೀಟಿಯಲ್ಲಿ ಭಾರತದ ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ನಂತರದ ಎರಡೂ ಅಂಚೆಚೀಟಿಗಳ ಚಿತ್ರಗಳಿವೆ.
ನಮ್ಮ ನಾಡಿನ ಕೀರ್ತಿಯನ್ನು ಉನ್ನತವಾಗಿಟ್ಟಿರುವ ಗೊಮ್ಮಟನ ಮೂರ್ತಿ ಅಂಚೆಚೀಟಿಯಲ್ಲಿ ಕಾಣಿಸಿಕೊಂಡದ್ದು ೯-೨-೧೯೮೧ ರಂದು.
ವನ್ಯಜೀವಿ ಸಂರಕ್ಷಣೆ ಎಂಬ ವಿಷಯವಿಟ್ಟುಕೊಂಡು ೭-೧೦-೧೯೬೩ ರಲ್ಲಿ ಐದು ಅಂಚೆಚೀಟಿಗಳನ್ನು ಬಿಡುಗಡೆಮಾಡಿದರು. ಅವುಗಳಲ್ಲಿ ನಮ್ಮ ಗಜರಾಜನೂ ಒಬ್ಬ.
ಉಳುವಾಯೋಗಿಯಾದ ರೈತನ ಚಿತ್ರ ಅಂಚೆ ಚೀಟಿಯಲ್ಲಿ ಬಂದದ್ದು ೩೦-೧೨-೧೯೫೯ರಂದು.
ಮಂಗೋಲಿಯಾ ದೇಶದ ಈ ಅಂಚೆಚೀಟಿಯಲ್ಲಿ ಅಣಬೆ ಬೆಳೆದಿದೆ.
ಹೈದರಾಬಾದಿನ ಹೊರಭಾಗದಲ್ಲಿರುವ ಗೋಲ್ಕೊಂಡ ಕೋಟೆಯಲ್ಲಿ ಒಂದು ತುದಿಯಲ್ಲಿ ನಿಂತು ಚಪ್ಪಾಳೆ ತಟ್ಟಿದರೆ ಇನ್ನೊಂದು ತುದಿಯಲ್ಲಿ ಕೇಳಿಸುತ್ತದೆ. ಈ ಕೋಟೆಯಲ್ಲಿನ ನೀರು ಸರಬರಾಜು ಮತ್ತು ಗಾಳಿ ಬೆಳಕಿನ ವ್ಯವಸ್ಥೆಯನ್ನು ನೋಡಲಾದರೂ ಒಮ್ಮೆ ಅಲ್ಲಿಗೆ ಹೋಗಿ ಬರಬೇಕು. ಈ ಅಂಚೆಚೀಟಿ ೩೧-೧೨-೨೦೦೨ ರಂದು ಬಿಡುಗಡೆಯಾಗಿದೆ.
ತಿರುಪತಿಯಿಂದ ೧೨ ಕಿಮೀ ದೂರದಲ್ಲಿರುವ ಚಂದ್ರಗಿರಿಕೋಟೆ ಒಂದು ಕಾಲದಲ್ಲಿ ವಿಜಯನಗರದ ಅರಸರ ರಾಜಧಾನಿಯಾಗಿತ್ತು. ಈಗ ಪ್ರತಿದಿನ ಸಂಜೆ ಶಬ್ದ ಮತ್ತು ಬೆಳಕಿನ ವ್ಯವಸ್ಥೆಯನ್ನು ಅಳವಡಿಸಿ ಪ್ರವಾಸಿಗರು ರಾಜರ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದ್ದಾರೆ. ಇದರ ಅಂಚೆಚೀಟಿ ಬಿಡುಗಡೆಯಾದದ್ದು ೩೧-೧೨-೨೦೦೨ ರಂದು.
ಭಾರತ ಮತ್ತು ಜಪಾನ್ ರಾಜತಾಂತ್ರಿಕ ಸಂಬಂಧದ ೫೦ನೇ ವಾರ್ಷಿಕೋತ್ಸವದ ಸವಿನೆನಪಿಗೆ ೨೬-೪-೨೦೦೨ ರಂದು ಈ ಅಂಚೆಚೀಟಿ ಬಿಡುಗಡೆ ಮಾಡಿದ್ದಾರೆ. ನಮ್ಮ ಕೇರಳದ ಕಥಕ್ಕಳಿ ಮತ್ತು ಜಪಾನಿನ ಪುರಾತನ ನಾಟಕ ಪ್ರಕಾರವಾದ ಕಬುಕಿ ಒಂದೆಡೆ ಸೇರಿಸಿರುವರು. ಭಾಷೆ ಬೇರೆಯಾದರೂ ಭಾವವೊಂದೇ.
ಬೋರಿಬಂದರಿನಿಂದ ಥಾನೆವರೆಗೂ ೩೪ ಕಿಮೀ ದೂರವನ್ನು ಮೊಟ್ಟಮೊದಲ ಭಾರತೀಯ ರೈಲು ಬಿಸಿಹಬೆಯುಗುಳುತ್ತಾ ಪಯಣಿಸಿದ್ದು ೧೬-೪-೧೮೫೩ ರಂದು. ಅಂದು ಶುರುವಾದ ಪಯಣ ಬಲು ದೂರ ಸಾಗಿದೆ. ಈಗ ೭೦೦೦ ಸ್ಟೇಷನ್ಗಳು, ೬೩೦೦೦ ಕಿಮೀ ಉದ್ದದ ಈ ಮಾರ್ಗವು ೧೬ ಲಕ್ಷ ಜನರಿಗೆ ಅನ್ನದಾತ. ಭಾರತೀಯ ರೈಲ್ವೆಯ ೧೫೦ನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗಾಗಿ ೧೬-೪-೨೦೦೨ ರಂದು ಆ ಹಳೆಯ ದಿನಗಳನ್ನು ನೆನಪಿಸುವ ಈ ಅಂಚೆ ಚೀಟಿ ಬಿಡುಗಡೆಯಾಯಿತು.
ಟಾನಿ ಕ್ಯಾಸ್ಟರ್ ಎಂಬ ಈ ಚಿಟ್ಟೆ ಅಂಚಿಚೀಟಿಯಾದದ್ದು ೩೦-೪-೨೦೦೦ ರಂದು.
ಅಮೆರಿಕ ಅಂಚೆಚೀಟಿಯಲ್ಲಿ ಗೂಬೆ ರಾರಾಜಿಸುತ್ತಿದೆ.
ಹಾರುತ್ತಿರುವ ಬೆಳ್ಳಕ್ಕಿಯ ಚಿತ್ರ ಅಂಚೆಚೀಟಿಯಲ್ಲಿ ಬಂದದ್ದು ೧೫-೭-೧೯೭೯ ರಂದು.
ಶುಭಾಶಯ ಪತ್ರಗಳ ವಿನಿಮಯ ಬಹುಕಾಲದಿಂದ ನಡೆದು ಬಂದಿದೆ. ದೀಪಾವಳಿ, ಹೋಳಿ, ಪೊಂಗಲ್, ವಿಜಯದಶಮಿ, ಈದ್, ಕ್ರಿಸ್ಮಸ್, ಹೊಸವರ್ಷ, ರಕ್ಷಾಬಂಧನ, ಪ್ರೇಮಿಗಳದಿನ... ಶುಭಾಶಯ ಪತ್ರವನ್ನು ನೆನಪಿಸುವ ಹಾರುತ್ತಿರುವ ಚಿಟ್ಟೆಗಳ ಅಂಚೆಚೀಟಿ ಪ್ರಕಟವಾದದ್ದು ೧೮-೧೨-೨೦೦೧ ರಂದು.
ತಿರುಪತಿಯ ತಿರುಮಲ ದೇವಸ್ಥಾನದ ಬಂಗಾರದ ಗೋಪುರವನ್ನು "ಆನಂದ ನಿಲಯಮ್ ವಿಮಾನಂ" ಎನ್ನುವರು. ೭೦೦ ವರ್ಷಗಳಷ್ಟು ಹಳೆಯದಾದ ಇದರ ಸವಿನೆನಪಿಗಾಗಿ ೧೧-೧೦-೨೦೦೨ ರಂದು ಅಂಚೆಚೀಟಿ ಬಿಡುಗಡೆಯಾಗಿದೆ.
೨೦೦೧-೨೦೦೨ ಪುಸ್ತಕಗಳ ವರ್ಷ. "ಎಲ್ಲರಿಗೂ ಪುಸ್ತಕ ಮತ್ತು ಎಲ್ಲವೂ ಪುಸ್ತಕಕ್ಕಾಗಿ". ಇದರ ಸವಿನೆನಪಿಗೆ ೨೮-೧-೨೦೦೨ ರಂದು ಈ ಅಂಚೆಚೀಟಿ ಬಿಡುಗಡೆಯಾಯಿತು.
"ಪಕ್ಷಿ ಪಿತಾಮಹ" ಡಾ.ಸಲೀಂ ಅಲಿ ಅವರ ನೂರನೇ ಜನ್ಮದಿನದ ನೆನಪಿಗೆ ೧೨ ನವೆಂಬರ್ ೧೯೯೬ ರಂದು ಈ ಅಂಚೆ ಚೀಟಿ ಬಿಡುಗಡೆಯಾಯಿತು. ಅವರೊಂದಿಗೆ ಪೇಯಿಂಟೆಡ್ ಸ್ಟಾರ್ಕ್ ಹಕ್ಕಿಗಳೂ ಇವೆ.
೧೯೭೨ನೇ ಇಸವಿಯಲ್ಲಿ ಮ್ಯೂನಿಚ್ನಲ್ಲಿ ನಡೆದ ೨೦ನೇ ಒಲಂಪಿಕ್ ಗೇಮ್ಸ್ ನೆನಪಿಸಲು ಅದೇ ವರ್ಷ ಆಗಸ್ಟ್ ೧೦ರಂದು ಈ ಅಂಚೆಚೀಟಿ ಬಿಡುಗಡೆಯಾಯಿತು.
"ಮೈಸೂರು ಹುಲಿ" ಟಿಪ್ಪುಸುಲ್ತಾನನ ಅಂಚೆಚೀಟಿ ಬಿಡುಗಡೆಯಾದದ್ದು ೧೫-೭-೧೯೭೪ ರಂದು.
ನೋಡಿದರೆ ಕಿಟಕಿಯಲ್ಲಿ ಕೂತಿದೆ "ಬಾರ್ನ್ ಔಲ್". ಕನ್ನಡದಲ್ಲಿ "ಪಾಳುಗುಮ್ಮ" ಅನ್ನುವರು. ಇದು ನಿಶಾಚರ ಹಕ್ಕಿ. ಹಳೆಯ ಕಟ್ಟಡಗಳಲ್ಲಿ, ಶ್ಮಶಾನಗಳಲ್ಲಿ ಇರುವಂತಹುದು ಇಲ್ಲಿಗೇಕೆ ಬಂತು? ದಾರಿ ತಪ್ಪಿ ಬಂತಾ?ಕಾಡು ಕಡಿಮೆಯಾಗುತ್ತಿದ್ದಾಗ ಹುಲಿಗಳು ಮನುಷ್ಯನ ವಾಸಸ್ಥಾನಕ್ಕೆ ನುಗ್ಗುತ್ತಿದ್ದವಂತೆ. ಈಗ ಗೂಬೆಗಳ ಸರದಿಯಿರಬೇಕು.
ಅಲ್ಲೆಲ್ಲಾ ಮುಸಲ್ಮಾನರ ಮನೆಗಳು. ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಏತಕ್ಕೆ ಫೋಟೋ ತೆಗೆಯುತ್ತಿರುವುದೆಂದು ಕೇಳಿದರು. ಪೇಪರಿಗೆ ಕೊಡಲು ಎಂದು ಹೇಳಿದೆ. ಅದೇನನ್ನಿಸಿತೋ ಅವರ ಮನೆಯೊಳಗೆ ಬಂದು ಮಹಡಿ ಮೇಲಿಂದ ಫೋಟೋ ತೆಗೆಯುವಂತೆ ನನಗೆ ಹೇಳಿದರು. ನನಗೋ ಮುಜುಗರ. ನನ್ನ ಹಿಂಜರಿಕೆ ಅರ್ಥವಾದಂತೆ ಒಬ್ಬ ಹುಡುಗನನ್ನು ಜೊತೆಮಾಡಿ ಕಳಿಸಿದರು.
"ಗೂಬೆ ಮನೆಗೆ ಬಂದರೆ ಅಪಶಕುನ. ಕೆಲವರು ಮನೇನೇ ಖಾಲಿ ಮಾಡ್ತಾರೆ. ಇವರ ಗಲಾಟೆಯಿಂದ ಅದು ಹಾರಿದ್ರೂ ಫೋಟೋ ತೆಗೆಯೋದಕ್ಕೆ ಹೋದ ನಮ್ಮ ಮೇಲೇ ಜನ ಗೂಬೆ ಕೂರಿಸ್ತಾರೆ. ಯಾಕೆ ಬೇಕು ಗ್ರಹಚಾರ. ಬನ್ನಿ ಹೋಗೋಣ" ಎನ್ನುತ್ತಾ ಶ್ರೀನಿವಾಸ್ ಹೊರಕ್ಕೆ ಎಳೆದುಕೊಂಡು ಬಂದರು.